ಮಸಣವಾಗಿಸಬೇಡ ಮನಸ,
ಕಸವನಾಗಿಸಬೇಡ ಕನಸ!
ಹೊಸತನವ ನೀ ಹೆಡೆದು,
ಹುಸಿತನವ ನೀ ತೊಡೆದು,
ಸಸಿಯ ನೆಡೆ, ಮುಂದೆ ನಡೆ,
ನಿನ್ನರಿವಿರಲಿ ಎಲ್ಲ ಕಡೆ,
ತಟ್ಟದೆಯೆ ನಿನ್ನ ತೊಡೆ,
ಬಿಚ್ಚದೆಯೆ ನಿನ್ನ ಹೆಡೆ,
ಶಾಂತಿಯನು ನೀನು ಪಡೆ,
ಅಲ್ಲಿಯೇ ಭಗವಂತನೆಡೆ!
ಅಲ್ಲಿಯೇ ಭಗವಂತನೆಡೆ!
ಮುಂಜಾನೆಯ ಬೆಳಕು ಕುಕ್ಕುಟವಾಯ್ತು ಕಣ್ಣೆರಡನು ಹೊರಲೋಕಕೆ ತೆರೆದಾಯ್ತು! ಒಳಗಣ ಲೋಕವ ಕಾಣುವ ಕಣ್ಣನು ತೆರೆಯುವ ಸಮಯವು ಬಂದಾಯ್ತು! ಕಣ್ಣನು ಒರೆಸಿರಿ, ಮಣ್ಣನು ತೊರೆಯಿ...
No comments:
Post a Comment