ಕೃಷ್ಣ
ಲೋಕಕೆ ಬಂದನು ದೇವಕಿಕಂದನು
ಎಲ್ಲರ ಹೃದಯದಿ ನೆಲೆಸಿದನು
ದೈತ್ಯರ ಕೊಲ್ಲುತ, ಎಲ್ಲರ ಮೆಲ್ಲುತ
ಭಕುತಿಯ ಬೀಜವ ಹರಡಿದನು!
ಒಳಗೂ ಹೊರಗೂ ಎಲ್ಲವ ಅರಿತವ
ನಂದನ ನಂದನು ಶ್ರೀಧರನು
ಗೋಪೀಜನ ಮನಗ್ ಒಲಿದವನು
ಪಾಂಡವ ಪ್ರಿಯನಿವ ಮಾಧವನು!!
ಅಣುವಲಿ ಅಣು ಇವ ಪರನಿವ ಶಿವನಿವ
ಅಚ್ಯುತನಿವ ಇವ ಅವ್ಯಯನು
ಕರುಣಾಸಾಗರ ಸಾಕ್ಷಿಸ್ವರೂಪ
ವಲ್ಲಭನಿವ ಸರ್ವೋತ್ತಮನು
ದ್ರೌಪದಿ ರಕ್ಷಕ ಕಾಲ ವಿಭಕ್ಷಕ
ಧರ್ಮ ಸುರಕ್ಷಕ ದ್ವಾರಕನು
ರಾಮನು ಇವ ಇವ ಭೀಮನು ಇವ ಇವ
ತುಲಸೀ ಪ್ರಿಯ ಗೋವರ್ಧನನು
ಚೋರನು ಇವ ಇವ ಜಾರನು ಇವ ಇವ
ಘೋರನು ಮಾರನು ಪ್ರಿಯಕರನು
ವೇದ್ಯನು ವೈದ್ಯನು ಔಷದನಿವನಿವ
ಮುಕ್ತಿಯು ಲೋಕದನಾಯಕನು!
ಕೃಷ್ಣನು ಭದ್ರ-ಸುಭದ್ರನ ಅನುಜನು
ಭಕುತನ ಹೃದಯದಿ ಕರಗುವನು!
ಕೇಶವ ಮಾಧವ ವಿಕ್ರಮನಿವ
ಇವ ವಾಮನನು, ಹರಿಕೇಸರನು!
No comments:
Post a Comment